ಕನ್ನಡ ಚಿತ್ರ ರಂಗದಲ್ಲೇ ಬಹು ದೊಡ್ಡ ಧಾಖಲೆಗೆ ಹೆಸರಾದ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಮುಂಗಾರು ಮಳೆ’ ಎಲ್ಲರಿಗೂ ಚಿರಪರಿಚಿತ. ಆ ಸಿನಿಮಾ ಹಣ ಹಾಗೂ ಗೌರವ ಎರಡನ್ನೂ ಸಂಪಾದಿಸಿಕೊಂಡಿದ್ದು ಆಗಿದೆ. ಆಮೇಲೆ ‘ಗಾಳಿಪಟ’ ಇವರ ಜೋಡಿಯಲ್ಲಿ ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿದ್ದು, ಈಗ ‘ಮುಗುಳ್ನಗೆ’ ಸಿನಿಮಾ ತಯಾರಿಗೆ ಈ ಜೋಡಿ ಸೇರಿಕೊಂಡಿದೆ.
ಯಶಸ್ ಫಿಲ್ಮ್, ಯೋಗರಾಜ್ ಮೂವೀಸ್ ಹಾಗೂ ಗೋಲ್ಡನ್ ಮೂವೀಸ್ ಜಂಟಿಯಾಗಿ ನಿರ್ಮಾಣಕ್ಕೆ ಮುಂದಾಗಿರುವ ಈ ‘ಮುಗುಳ್ನಗೆ’ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಾಗಿ ಜನಪ್ರಿಯ ನಟಿ ಅಮೂಲ್ಯ, ಆಶಿಕ (‘ಕ್ರೇಜಿ ಬಾಯ್’ ನಾಯಕಿ) ನಿಕಿತ ನಾರಾಯಣ್ (‘ಮಡಮಕ್ಕಿ’ ನಾಯಕಿ) ನಾಯಕಿಯರು. ಸಲಾಂ ಈ ಚಿತ್ರದ ಪ್ರಮುಖ ನಿರ್ಮಾಪಕರು.
ಚಿತ್ರದ ಪ್ರತಿಯೊಂದು ಪಾತ್ರವು ನಗುವಿನಲ್ಲೇ ತೊಡಗಿಕೊಂಡಿರುವಹಾಗೆ ಚಿತ್ರಕತೆಯಲ್ಲಿ ಚಿಂತಿಸಿದ್ದಾರೆ ಜನಪ್ರಿಯ ನಿರ್ದೇಶಕ ಯೋಗರಾಜ ಭಟ್ಟರು. ಅನಂತ್ ನಾಗ್, ಅಚ್ಯುತ್ಕುಮಾರ್ ಹಾಗೂ ಇನ್ನಿತರರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಳೆದ ಡಿಸೆಂಬರ್ 9 ರಂದು ಬೊಮ್ಮನಹಳ್ಳಿಯ ಪಂಚಮುಖಿ ದೇವಸ್ಥಾನದಲ್ಲಿ ಬೆಳಗ್ಗೆ 6.30ಕ್ಕೆ ಪ್ರಥಮ ದೃಶ್ಯ ಶ್ರೀ ವಿನಾಯಕನ ಮೇಲೆ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಅಲ್ಲದೆ ಪಾಂಡಿಚೇರಿ ಅಲ್ಲಿ ಚಿತ್ರೀಕರಣದ ಯೋಜನೆಯನ್ನು ಸಿಡ್ಡಪಡಿಸಲಾಗಿದೆ.
ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಐದು ಹಾಡುಗಳು ಸಿದ್ದವಾಗುತ್ತಿದೆ. ಸುಜ್ಞಾನ್ ಮೂರ್ತಿ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.